ಋಣ

ಅಪ್ಪಾ ಹೊರಲಾರೇನೋ ಈ ಮಣಭಾರ ಹೆಣಭಾರಾ
ತಿಂದುಂಡ ತುತ್ತುಗಳೆಲ್ಲಾ ಬಾಯಲ್ಲೇರಿ ಬಂದಾಡಿಕೊಳ್ಳುತ್ತವೆ
ಕುಡಿದ ಹನಿಹನಿಯೂ ಕಣ್ಣೀರ ಪೋಣಿಸುತ್ತದೆ
ಸೇವಿಸಿದ ಉಸಿರುಸಿರೂ ಮೂಗುಕಟ್ಟುತ್ತದೆ
ಮಲಗಿದಿಂಚಿಂಚು ನೆಲವೂ ಬಾಯ್ದೆರೆದು ನುಂಗುತ್ತದೆ
ನಡೆದಡಿಯಡಿ ಮಣ್ಣೂ ಮಣ್ಣು ಹೊರಿಸುತ್ತದೆ
ಪಡೆದ ಕಾಸು ಕಾಸೂ ಮಾನವ ಕಾಸಿಗೆ ಪಂಚೇರು ಮಾರುತ್ತದೆ
ಒಂದೇ ಶ್ವೇತಬಿಂದು ಬೆಳೆದು ಬಿಳಿ ತೊನ್ನಾಗಿ ಮೈ ವ್ಯಾಪಿಸಿದೆ
ಒಂದೇ ರೇತೋಬಿಂದು ನಾಳನಾಳವ ತುಂಬಿ ಹರಿದು ರಕ್ತತರ್ಪಣ ಬೇಡುತ್ತದೆ
ತುತ್ತನ್ನವಿಕ್ಕಿದ ಮನೆ ಮನೆಯೂ ತೊತ್ತಾಗು ಬಾ ಎನ್ನುತ್ತಿದೆ
ಅಂಟಿಹರಡಿ ಕವಲಾದ ಕರುಳುಬಳ್ಳಿ ಉರುಲಾಗಿ ಕೊರಳ ಹಿಚುಕುತ್ತದೆ
ಒಂದೊಂದು ಪೈಯೂ ಬಡ್ಡಿ ಚಕ್ರ ಬಡ್ಡಿಯಾಗಿ ಪ್ರಾಣಪಣದ ಲೆಕ್ಕ ಕೇಳುತ್ತದೆ
ಅಂಬೆಯ ಮೊಲೆಹಾಲೇ ಕಕ್ಕು ನನ್ನ ಲೆಕ್ಕವನೆಂದ ಮೇಲೆ
ಅಪ್ಪಾ ಯಾವ ಋಣ ತೀರಿಸಲಿ? ಯಾವ ಭಾರ ಭರಿಸಲಿ?
ಹೊರಲಾರೆನೋ ತಂದೆ ಈ ಗಿರಿಭಾರ-ಋಣಭಾರ-ನಾನು ಅಲ್ಪ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀದಿ
Next post ಗೋಡ್ರು ಬುಸ್ ಕೊಮಾಸಾಮಿ ಖುಸ್ ರೆಡ್ಡಿಬಾಂಬ್ ಠುಸ್

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys